|
ಕನ್ನಡ ಸಾಹಿತ್ಯ.ಕಾಂ
|
|
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
|
|
ಈ ದಿನ ಭಾನುವಾರ-
|
|
ಹರಿವ ಹೊಳೆ ತಟ್ಟನೆ ನಿಂತು ಮಡುವಾಗಿ
|
|
ನನ್ನ ದಡದಲ್ಲಿರುವ ಗಿಡಮರ ಬಳ್ಳಿ
|
|
ಪ್ರತಿಫಲಿಸಿ,
|
|
ಏನೋ ಸಮಾಧಾನ.
|
|
ಅಂಥ ಅವಸರವಿಲ್ಲ,
|
|
ಬೆಳಗಿನ ನಿದ್ದೆಗಿನ್ನೊಂದಿಷ್ಟು ವಿಸ್ತರಣೆ
|
|
ಕೊಡಬಹುದು.
|
|
ಬೆಳೆದಿರುವ ಗಡ್ಡ ಇನ್ನೂ ಒಂದೆರಡು ತಾಸು
|
|
ಕಾಯಬಹುದು.
|
|
ಈ ಒಂದು ದಿನವಾದರೂ
|
|
ಬರುವ ಹೋಗುವ ಅವಸರದ ಹೆಜ್ಜೆಗಳ,
|
|
ಬೆಳೆವ ಕ್ಯೂ ಬಾಲಗಳ, ಉರುಳು ಗಾಲಿಗಳ,
|
|
ಫೋನುಗಳ, ಫೈಲುಗಳ ರಗಳೆಯಿಲ್ಲದ ಹಾಗೆ
|
|
ಬಿದ್ದಲ್ಲೇ ಬಿದ್ದು ನಾನೇ ನಾನಾಗಬಹುದು.
|
|
ಈ ನಾನು
|
|
ಪರಕ್ಕೆ ಟಿಕೆಟ್ಟು ತೆಗೆದಿರಿಸಿ
|
|
ಇಹದ ವೆಯಿಟಿಂಗ್ ರೂಮಿನಲ್ಲಿ
|
|
ರೈಲಿಗೆ ಕಾಯುತ್ತಿಲ್ಲ.
|
|
ನನ್ನ ಉದ್ಧಾರಕ್ಕೆ
|
|
ಯಾವ ದೇವರಿಗೂ ಲಂಚ ಕೊಡಬೇಕಾಗಿಲ್ಲ.
|
|
ಸಾಧ್ಯವಾದಷ್ಟು ಈ ಬೀದಿಗಳ ಮೇಲೆ
|
|
ನನ್ನ ಗಾಲಿಗಳನ್ನು ಉಜ್ಜಿ ಸವೆಸಿದ್ದೇವೆ;
|
|
ಈ ಒಂದು ದಿನ, ನಿಂತ ಗಾಲಿಗಳ ಕೀಲುಗಳಿಗೊಂದಿಷ್ಟು
|
|
ಎಣ್ಣೆ ಹೊಯ್ಯುತ್ತೇನೆ.
|
|
ಎಂಥ ಸೊಗಸಾಗಿದೆ ಕಿಟಕಿಯಾಚೆಗೆ
|
|
ನೀಲಿಯಲ್ಲಿ ತೆಳ್ಳಗೆ ತೇಲುವ ಮೋಡ,
|
|
ಕೆಳಗೆ ಒಂದೇ ಗುಡ್ಡ, ಗುಡ್ಡದ ಮೇಲೆ
|
|
ತಲೆಗೆದರಿ ನಿಂತ ಒಂದೇ ಮರ.
|
|
ಎಲ್ಲವೂ ರಜಾ ತೆಗೆದುಕೊಂಡಂತಿದೆ
|
|
ಈ ವಿರಾಮ!
|
|
ಇಂಥ ಭಾನುವಾರದ ಒಂದು ಕ್ಷಣವನ್ನೆ
|
|
ನಿತ್ಯವಾಗಿಸಿಕೊಂಡಿರಬಹುದೆ
|
|
ಸಂತ-ಸಿದ್ಧರ ಮನಸ್ಸು?
|
|
ಹಾಗೆ ನೋಡಿದರೆ, ಈ ಒಂದು ಕ್ಷಣ
|
|
ನಾನು ಒಬ್ಬ ಸಿದ್ಧ
|
|
ಅಥವಾ ಸ್ವಲ್ಪ ಕೆಳಗಿನ ಬುದ್ಧ!
|
|
*****
|
|
– ೧ – ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ – ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ. – ೨ […]
|
|
೧ ಒಂದರಗಳಿಗೆಯ ಬಂಧುರ ಸ್ಪರ್ಶಕೆ ಮಂದಾನಿಲನೈತಂದಿಹನು; ಹಗಲಿನ ಬಿಸಿಲಿಗೆ ಮಾಗಿದ ಬನಗಳ ಫಲಗಳ ಸೊಂಪಿನಲೀಜಿಹನು. ೨ ರವಿಯದೊ ಬಿದ್ದನು! ಕವಿಯಿದೊ ಎದ್ದನು ತಂಗಾಳಿಯ ಜತೆ ಕೇಳಿಯಲಿ- ನೀಲಾಂಗಣದಲಿ ಮೋಡದ ಪುತ್ಥಳಿ ತೂಕಡಿಸುತ್ತಿರೆ ನಿದ್ದೆಯಲಿ. ೩ […]
|
|
ಅನ್ಯಮನಸ್ಕನಾಗಿ ಬೆಳಗಿನ ಝಾವ ಗೇಟ್ ತೆರೆದು ಎಂದಿನಂತೆ ಒಳಬರುವಾಗ ಮನೆಯೊರಸಿ, ರಂಗೋಲೆಹಾಕಿ ಮುಂಭಾಗ ಓರಣಗೊಳಿಸಿ ಸುಸ್ತಾದ ಹೆಂಡತಿ ಕಾಲೊರೆಸಿಕೊಂಡು ಒಳಗೆ ಬನ್ನಿ ಎನ್ನುತ್ತಾಳೆ. ಎಂದಿನಂತೆ ಫುಟ್ ರಗ್ಗಿನ ಮೇಲೆ ಕಾಲೊರೆಸಿಕೊಳ್ಳುವುದು ರಗ್ಗಿಗೆ ಪಾದ ಜುಲುಮೆಯಲ್ಲಿ […]
|
|
ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ
|
|
ಟಿಪ್ಪಣಿ *
|
|
ಹೆಸರು *
|
|
ಮಿಂಚೆ *
|
|
ಜಾಲತಾಣ
|
|
ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ.
|
|
This site uses Akismet to reduce spam. Learn how your comment data is processed.
|
|
ಬಿಟ್ಟ್ಯಾ
|
|
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
|
|
ಟಿಪ್ಸ್ ಸುತ್ತ ಮುತ್ತ
|
|
"ಕಾಫಿಗೆ ಬರ್ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
|
|
ಮನ್ನಿ
|
|
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
|
|
ಬುಗುರಿ
|
|
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |