|
ಕನ್ನಡ ಸಾಹಿತ್ಯ.ಕಾಂ
|
|
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
|
|
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
|
|
ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ
|
|
ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ
|
|
ಹಿಡಿದೆಳೆದು ಒಂಟೆಗಳ ಸಾಲಿಗೆ
|
|
ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ”
|
|
ಅವನು ರಕ್ತ ತೆಗೆದು ವೀರ್ಯವಾಗಿಸುತ್ತಾನೆ, ವೀರ್ಯದಿಂದ
|
|
ಜೀವ ಸೃಷ್ಟಿಸುತ್ತಾನೆ, ಜೀವದ ಬಂಧ
|
|
ಹಿಡಿದು ಕತ್ತರಿಸಿ ತರ್ಕ ಹುಟ್ಟಿಸುತ್ತಾನೆ
|
|
ಪುನರುತ್ಥಾನದ ಹಿರಿಮೆ ಮೊಳಗಿಸುತ್ತಾನೆ
|
|
ಕೋಲು ಹಿಡಿದು ಪಾರಿವಾಳ ಅಟ್ಟಿದಂತೆ
|
|
ಅಟ್ಟುತ್ತಾನೆ ನನ್ನ, ಲಕ್ಷ ರೀತಿಗಳಿಂದ
|
|
ಒಲಿಸಿ, ಪರಿಪರಿಯಾಗಿ ಹಂಬಲಿಸಿ
|
|
ತನ್ನ ಸನ್ನಿಧಿಗೆ ಹಾಜರಾಗಿಸಿ
|
|
ಸಮುದ್ರಯಾನಕ್ಕೆ ನನ್ನ ನಾವೆಯಾಗಿಸುತ್ತಾನೆ
|
|
ಹಿಡಿದು ಹಡಗಿನ ಕಂಭಕ್ಕೆ ಕಟ್ಟುತ್ತಾನೆ
|
|
ನಿರ್ಮಲತೆ ಶೋಧಕರಿಗೆ ನಾನು ಶುದ್ಧಜಲ
|
|
ಅದೃಷ್ಟಹೀನರ ದಾರಿಗೂ ಬರಿ ಗೊಬ್ಬಳಿ ಮುಳ್ಳು
|
|
ಅಷ್ಟ ಸ್ವರ್ಗಗಳ ಸೇರುವುದು ದೊರೆಯ ಗುರಿಯಲ್ಲ
|
|
ನಾನೆ ದೊರೆಯ ಗುರಿ, ಎಂಥಾ ಸೌಭಾಗ್ಯಶಾಲಿ!
|
|
ದೊರೆಯ ದಳಕ್ಕೆ ಸೇರಿದವರು ಸಾವಿನಿಂದ ಪಾರು
|
|
ದೊರೆಯ ಕೈಯ ಖಡ್ಗ ನೋಡಿ, ಮಾಡಿದ ಗುರಾಣಿ ಚೂರು
|
|
ಅಸಂಖ್ಯ ಹಗಲು ರಾತ್ರಿಗಳ ಆತ್ಮದ ಮುತ್ತಿಗೆಗೆ ನಾನು ಪಹರೆ
|
|
ಮುತ್ತುಗಳ ಮೊರೆವ ಕಡಲಲ್ಲೀಗ ಅದು ನನ್ನಿಂದ ಮರೆ
|
|
ಅವನ ಸೊಬಗನ್ನು ಎಷ್ಟೆಂದು ಬಣ್ಣಿಸುತ್ತಿ
|
|
ಅವನು ಉಪಮಾತೀತ, ಇಲ್ಲಿಗೆ ಸಾಕು.
|
|
ಪ್ರಳಯದ ಅಲೆಯು ಮೇಲೆ ನಾನು ಹೊರಟೆ
|
|
*****
|
|
ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […]
|
|
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಗಳಿಗೆಯೂ ಆತ್ಮ ಕೊಳೆಯುತ್ತಿದೆ ನಿನ್ನೆದುರು ಬೆಳೆಯುತ್ತ ಬಂದಿದೆ ಬರೀ ಒಂದು ಆತ್ಮಕ್ಕಾಗಿ ನಿನ್ನ ಬಳಿ ಮೊರೆಯಿಡಬೇಕೆ? ನೀನು ಕಾಲಿಟ್ಟ ಕಡೆ ನೆಲದಿಂದ ತಲೆಯೊಂದು ಚಿಮ್ಮುತ್ತದೆ? […]
|
|
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […]
|
|
ಬಿಟ್ಟ್ಯಾ
|
|
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
|
|
ಟಿಪ್ಸ್ ಸುತ್ತ ಮುತ್ತ
|
|
"ಕಾಫಿಗೆ ಬರ್ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
|
|
ಮನ್ನಿ
|
|
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
|
|
ಬುಗುರಿ
|
|
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |